ಶಿರಸಿ:
ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ರಿ. ಶಿರಸಿ, ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು (ಶಿರಸಿ) ಇದರ ಸಹಯೋಗದೊಂದಿಗೆ, 14 ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ರಂಗಧಾಮದಲ್ಲಿ ಜೂ.1, ಭಾನುವಾರದಂದು ಸಂಜೆ 4 ಗಂಟೆಯಿಂದ ರಾತ್ರಿ 8-30 ಗಂಟೆಯವರೆಗೆ ನಡೆಸಲು ತೀರ್ಮಾನಿಸಲಾಗಿದೆ.
ಅಂದು ಸಭಾ ಕಾರ್ಯಕ್ರಮವನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀಮಾತಾ ವಿವಿದೋದ್ಧೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ. ಎನ್. ಹೆಗಡೆ ಹಿರೇಸರ, ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಮತ್ತು ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ ದೊಡ್ಡೂರು ಭಾಗವಹಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಹಿರಿಯ ಲೆಕ್ಕಪತ್ರ ಪರಿಶೋಧಕ ಉದಯ ಸ್ವಾದಿ ವಹಿಸಲಿದ್ದಾರೆ. ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ನಾಗರಕುರ ಇವರು ಅತಿಥಿಗಳ ಸ್ವಾಗತ ಮತ್ತು ಪ್ರಸ್ತಾವನೆಯ ನುಡಿಗಳನ್ನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಭಾಗವತರಾದ ರವೀಂದ್ರ ಭಟ್ ಅಚವೆ ಇವರನ್ನು ಸನ್ಮಾನಿಸಲಾಗುವುದು ಮತ್ತು ಕುಮಾರಿ ಅಭಿಜ್ಞಾ ಹೆಗಡೆ ಇವರಿಗೆ ಪ್ರತಿಬಾ ಪುರಕಾರವನ್ನು ನೀಡಿ ಗೌರವಿಸಲಾಗುವುದು.
ನಂತರ “ಸುದರ್ಶನ ವಿಜಯ” ಎಂಬ ಯಕ್ಷಗಾನ ಬಯಲಾಟವನ್ನು ಜಿಲ್ಲೆಯ ಯುವ ಕಲಾವಿದರು ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೋಹಿಣಿ ಹೆಗಡೆ ಶಿರಸಿ ಇವರು ನಿರ್ವಹಿಸಲಿದ್ದಾರೆ. , ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಗದೀಶ ಭಂಡಾರಿ ಇವರು ವಂದನಾರ್ಪಣೆಯನ್ನು ಗೈಯ್ಯಲಿದ್ದಾರೆ ಎಂದು ಸಂಘಟಕರಾದ ಕೇಶವ ಹೆಗಡೆ ನಾಗರಕುರ ಇವರು ತಿಳಿಸಿರುತ್ತಾರೆ.